Manjunath c Tiptur
ಸೋಮವಾರ, ಮಾರ್ಚ್ 11, 2013
ಗುರುವಾರ, ನವೆಂಬರ್ 15, 2012
ಮಂಗಳವಾರ, ನವೆಂಬರ್ 13, 2012
ಕಾವ್ಯ ಕನ್ನಿಕೆ
ಚಂದಿರನ ಊರಿಂದ , ಚುಕ್ಕಿಗಳ ತೇರಿಂದ
ಹುಣ್ಣಿಮೆಯ ಮನೆಯಿಂದ , ಜಾರಿ ಹೊರಬಂದ
ಕಡಲ ಅರಮನೆಯ ರಾಣಿ ನೀನೇನಾ ?
ಮುಂಗಾರಿನ ಮೊದಲ , ಆ ಕರಿಮೋಡಗಳಿಂದ
ಹನಿಯಾಗಿ ಧರೆಗಿಳಿದ , ಮಳೆಯ ನಡುವಿಂದ
ಮಿನುಗಿ ಮರೆಯಾದ , ಮಿಂಚು ಬಳ್ಳೀನಾ ?
ಪನ್ನೀರ ಕಡಲಿಂದ , ಮಿಂದೆದ್ದು ಬಂದ
ಕೆಂಪು ಸೂರ್ಯನ , ಪ್ರಥಮ ಕಿರಣಾನಾ ?
ಮುಂಜಾನೆ ಮಂಜಿಂದ ,
ತೋಯ್ದಾಡೋ ಗೂಡಿಂದ
ಮೈಮುರಿದು , ಹೊರ ಇಣುಕಿದ
ಆ ಹಕ್ಕಿಗಳ ಕೊರಳಿಂದ , ಉಲಿದಾ ಕಲರವಾನಾ ?
ಚಿತ್ರ ಕೃಪೆ :- ಗೂಗಲ್ ಇಮೇಜ್
ಶನಿವಾರ, ನವೆಂಬರ್ 10, 2012
ಗುರುವಾರ, ಅಕ್ಟೋಬರ್ 18, 2012
ಬೀಳ್ಕೊಡುಗೆ
ಏನನ್ನು ಬಿಟ್ಟು,
ಏನನ್ನು ಕೊಟ್ಟು ,
ಹೋಗುತ್ತಿರುವೆಯೆಂದು ...
ಆ ರೈಲಿನಲ್ಲಿ ನನ್ನ ಆಶಯ , ಕನಸು, ಸ್ನೇಹ, ಪ್ರೀತಿ , ಸಮಾಧಾನ, ಸಂಗಾತಿ, ಮುಗುಳ್ನಗೆ, ಸಂತೋಷ, ಎಲ್ಲವೂ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಅವುಗಳಿಲ್ಲದಿದ್ದರೂ, ನನ್ನ ಹೃದಯ ಭಾರವಾದಂತಿತ್ತು. ಕಣ್ಣಿನಲ್ಲಿ ಹನಿಗಳು ಕುಳಿತು ಬೀಳ್ಕೊಡಲು ಬಂದಂತಿತ್ತು. ನಿನ್ನ ಕಣ್ಣಿನಲ್ಲಿ ಎಂದೂ ಕಾಣದ ಯಾವುದೋ ವಿಷಯ ಕಂಡಂತಿತ್ತು. ನೋವು ಕೂಡ ಕೆಲಕಾಲ ತಂಗಿದಂತಿತ್ತು.
ಶನಿವಾರ, ಆಗಸ್ಟ್ 25, 2012
ನಿನ್ನ ಸವಿ ನೆನಪುಗಳು
ನಿನ್ನ ಸವಿ ನೆನಪುಗಳು
ಮುಂಜಾನೆಯ ಚಿಗುರೆಲೆ ಮೇಲೆ
ಕುಳಿತ ಇಬ್ಬನಿ, ಕಣ್ಣ್ ಹೊಡೆದಾಗ
ನೀನು ನೆನಪಾಗುತ್ತೀ ಗೆಳತಿ.
ಮರೆತು ನಿನ್ನನ್ನು, ಮುನಿಸು ಬಂದಂತೆ
ನೀನು ನೆನಪಾಗುತ್ತೀ ಗೆಳತಿ.
ನೆನಪಿನ ಆಕಳಿಕೆ ಪದೇ ಪದೇ
ಬಂದಾಗ, ನೆನಪಿನ ಅಂಗಳದಲ್ಲಿ
ನೀನು ನೆನಪಾಗುತ್ತೀ ಗೆಳತಿ.
ಹಿಂದಿನಿಂದ ಯಾರೋ , ನನ್ಹೆಸರು
ಕರೆದಾಗ, ಆ ಉಸಿರಲೂ
ನೀನು ನೆನಪಾಗುತ್ತೀ ಗೆಳತಿ.
ನಾವಲೆದ ಬೀದಿಗಳು, ಕುಳಿತಂತ
ಜಾಗಗಳಲ್ಲಿ , ಮೌನವಾಗಿ
ಮತ್ತೆ ನೆನಪಾಗುತ್ತೀ ಗೆಳತಿ.
ಮನದ ಪುಸ್ತಕದಲ್ಲಿ ಅಚ್ಚೊತ್ತಿದ
ನಿನ್ನೆಸರು , ಪ್ರತಿ ಪುಟದಲ್ಲೂ
ನೀನೆ ನೆನಪಾಗುತ್ತೀ ಗೆಳತಿ.
ಮರೆತು ನಿನ್ನನ್ನು, ಮುನಿಸು ಬಂದಂತೆ
ಮರೆತು ಬಿಡುವೆನು ಎಂದಾಗ, ಮರೆಯಲಿ ನಿಂತು ನೆನಪಾಗುತ್ತೀ , ಗೆಳತಿ.
ಆತಂಕದ ಪ್ರತೀ ಕ್ಷಣ , ಅರೆಗಳಿಗೆ
ಆತಂಕದ ಪ್ರತೀ ಕ್ಷಣ , ಅರೆಗಳಿಗೆ
ಅನುಮಾನ , ಅತಿರಿಕ್ತ ಪದದಲ್ಲೂ
ನೀನೆ ನೆನಪಾಗುತ್ತೀ ಗೆಳತಿ.
ಸುಮ್ಮನೇ ಇರಲಾರೆ, ಮೇಲೆದ್ದು ಹೋಗಲಾರೆ ,
ನಿನ್ನ ನೆನಪೇ ಇರುವ ,ಈ ಜಗದಲ್ಲಿ
ಏಕೆ ಕಾಡುತ್ತೀ ಗೆಳತಿ.
ಹರುಷವೊಂದೆ ಬಾಳಿನಲಿ, ಬೇರೆಲ್ಲ
ನೆನಪುಗಳೇ , ಸವಿನೆನಪುಗಳನ್ನು ನೆನಸಿಟ್ಟು ,
ಏಕೆ ಸುಮ್ಮನೆ ನೆನಪಾಗುತ್ತೀ ಗೆಳತಿ.
ಮಂಗಳವಾರ, ಆಗಸ್ಟ್ 21, 2012
ವಲಸೆ ಹಕ್ಕಿ ಮತ್ತು ಮರ
ವಲಸೆ ಹಕ್ಕಿ ಮತ್ತು ಮರ
ಅದೊಂದು ವಲಸೆ ಹಕ್ಕಿ ಎಂದು ತಿಳಿದರೂ ತನ್ನ ಮಡಿಲಲ್ಲಿ ಆಶ್ರಯ ನೀಡಿತ್ತು ಆ ಮರ. ಸಣ್ಣ ಸಹಾಯ ದೊಡ್ಡ ಸ್ನೇಹವನ್ನು ಗಳಿಸಿಕೊಡುವಂತೆ, ಅವೆರಡೂ ಸ್ನೇಹಿತರಾದವು. ದಿನನಿತ್ಯವೂ ಮನಸ್ಸಿನಲ್ಲಿದ್ದುದನ್ನು ವಿನಿಮಯ ಮಾಡಿಕೊಳ್ಳುತ್ತಿದ್ದವು. ಕನಸುಗಳನ್ನೂ ಸಹ ಹಂಚಿಕೊಳ್ಳುತ್ತಿದ್ದವು .
ತನ್ನ ಜೊತೆ ಇರುವ ಪ್ರತಿ ಕ್ಷಣ ಹಕ್ಕಿಯನ್ನು ಸಂತೋಷವಾಗಿರಿಸಬೇಕೆಂದು ಬಯಸುತ್ತಿತ್ತು ಮರ . ಮರದ ಮನಸ್ಸಿಗೆ ಸ್ವಲ್ಪವೂ ನೋವಾಗದಂತೆ ಎಚ್ಚರ ವಹಿಸುತ್ತಿತ್ತು ಆ ಹಕ್ಕಿ .
ದಿನೇ ದಿನೇ ಅವುಗಳಲ್ಲಿ ವಿಶ್ವಾಸ, ನಂಬಿಕೆ ಹೆಚ್ಚಾಯಿತು. ಸ್ನೇಹಕ್ಕಿಂತ ಹೆಚ್ಚಾದ , ಪ್ರೀತಿಗಿಂತ ಪವಿತ್ರವಾದ ಮತ್ತ್ಯಾವುದೋ ಅನುಬಂಧ ಅವುಗಳನ್ನು ಬೆಸೆಯಿತು . ಜೊತೆಯವರ ಅಸೂಯೆಗೂ ಕಾರಣವಾಯಿತು.
ಕಳೆದ ಕಾಲಗಳೆಷ್ಟೋ ........ ಉಳಿದ ಮಾತುಗಳೆಷ್ಟೋ ........ ಅದೊಂದು ದಿನ ಬಂದೇ ಬಿಟ್ಟಿತು.
ಒಲ್ಲದ ಮನಸ್ಸಿನಿಂದಲೋ .... ಅಥವಾ ವಾಸ್ತವಕ್ಕೆ ಕಟ್ಟು ಬಿದ್ದೋ , ಮತ್ತೆ ಸಂಧಿಸುವ ನೆಪಹೇಳಿ ಆ ಹಕ್ಕಿ ವಿದಾಯ ಹೇಳಿತು. ಜೊತೆಗೆ ಕಳೆದ ಸವಿ ನೆನಪುಗಳೊಂದಿಗೆ ಆ ಮರ ಅಲ್ಲೇ ಉಳಿಯಿತು .
ಬೀಳ್ಕೊಟ್ಟ ಮನಸುಗಳ ಕನ್ನಡಿಯಾಗಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)